★ ಸಾಮಾನ್ಯ ಜ್ಞಾನ (ಭಾಗ - 6) General Knowledge (PART-6) :
134) ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.
135) ಸಂತಾನ ರಹಿತ ವ್ಯಕ್ತಿಯ ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
— ಗುಜರಾತಿನ ಕುಮಾರಪಾಲ.
136) ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು?
— ಕವಿರಾಜ ಮಾರ್ಗ.
137) ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.
138) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)- ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.
139) ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
— ಬಾದಾಮಿ ಶಾಸನ.
140) 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.
141) ಕೋಬರ್ ಗಡೆ, ಗವಾಯ್ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು?
— ರಿಪಬ್ಲಿಕನ್ ಪಕ್ಷ.
142) ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡೊಯ್ದ ಭೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.
143) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.
144) ಭಾರತದ ಸುಪ್ರಿಂಕೋರ್ಟ್ ನ 42 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು?
— ನ್ಯಾ|| H.L. ದತ್ತು.
145) 'ಎಬೋಲಾ' ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).
146) ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.
147) ಭಾರತದ ಮೊದಲ ವಾಯುಸಾರಿಗೆ ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).
148) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ 18 ನೇ ರಾಜ್ಯಪಾಲರಾಗಿ ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).
149) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ (ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ (2014, Sept, 5) ಅಧಿಕಾರ ವಹಿಸಿಕೊಂಡ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಯಾರು?
— ಪಿ. ಸದಾಶಿವಂ.
150) ದೇಶದಲ್ಲೇ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಾಜ್ಯ ಯಾವುದು?
— ತಮಿಳುನಾಡು.
151) ಕನ್ನಡದ ಮೊಟ್ಟಮೊದಲ ಪದ 'ಇಸಿಲ' ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.
152) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ?
— ಗುಜರಾತ.
153) ಪರಿಸರವನ್ನು ಕುರಿತ ಮೊದಲ ವಿಶ್ವ ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .
154) ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಪರ್ವತಗಳು ಯಾವವು?
— ಯೂರಲ್ ಪರ್ವತಗಳು.
155) ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.
156) ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
— ಇದು 180⁰ ರೇಖಾಂಶವಾಗಿದೆ.
157) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.
158) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ - ಬೌದ್ಧಧರ್ಮ ಕ್ಕೆ)
159) ದೇವದಾಸಿ ಪದ್ಧತಿಯ ಬಗ್ಗೆ ವಿವರವನ್ನು ನೀಡುವ ಮೊದಲ ಶಾಸನ ಯಾವುದು?
— ರಾಮಘರ ಶಾಸನ.
160) 'ಮಧ್ಯಪ್ರದೇಶದ ಜೀವನದಿ' ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.
161) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.
162) ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
— 'ತೆಲಂಗಾಣದ ಪೊಚಂಪಲ್ಲಿ'
163) 'ಕಂಪನಿ ಅಕ್ಬರನ' ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.
164) ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
— "ಮನುಷ್ಯ ಜಾತಿ ತಾನೊಂದೆವಲಂ".
165) ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)
166) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.
167) ಭಾರತದ 4 ನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.
168) 'ಅಯ್ಯಂಗಾರ್ ಯೋಗ' ಎಂದೇ ಹೆಸರಾಗಿದ್ದ, ಆಧುನಿಕ ಯೋಗದ ಪಿತಾಮಹ (the Father of Modern Yoga) ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್.
169) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.
170) ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.
171) "Not Just an Accountant" ಎಂಬ ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.
172) ಇತ್ತೀಚೆಗೆ (2014 Aug 13) ಭಾರತದ ಲೋಕಸಭೆಯ 15 ನೇ ಉಪಸಭಾಪತಿಯಾಗಿ ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ
173) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು?
— ಇಂದಿರಾ ಗಾಂಧಿ (1970-71).
174) S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
— ಯಾನ (29 ನೇ ಕಾದಂಬರಿ).
175) ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
— ಇಂದಿರಾಬಾಯಿ.
176) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ